Sunday, September 19, 2010

ಸುಭಾಷಿತಗಳು-1

|||सुभाषितानि-1|||

पृथिव्यां त्रीणि रत्नानि
जलमन्नं सुभाषितम् |
मूढैः पाषाणखण्डेषु
रत्नसंಜ್ಞಾ विधीयते ||1||

प्रियवाक्यप्रदानेन
सर्वे तुष्यन्ति जन्तवः |
तस्मात्तदेव वक्तव्यं
वचने का दरिद्रता ||2||

विहाय पौरुषं यो हि
दैवमेवावलंबते |
प्रासादसिम्हवत्तस्य
मूर्ध्नि तिष्टन्ति वायसाः ||3||

श्लोकस्तु श्लोकतां याति
यत्र तिष्टन्ति पण्डिताः |
लकारो लुप्यते तत्र
यत्र तिष्टन्त्यपण्डिताः ||4||

शिरसि धार्यमाणोऽपि
सोमः सोमेन शम्भुना |
तथापि कृशतां याति
कष्टः खलु पराश्रयः ||5||

दृष्टिपूतं न्यसेत्पादं
वस्त्रपूतं विबेज्जलम् |
सत्यपूतां वदेद्वाणीं
मनः पूतं समाचरेत् ||6||

निर्वनो वध्यते व्याघ्रः
निर्व्याघ्रं चिध्यते वनम् |
तस्माद्व्याघ्रो वनं रक्षेत्
वनं व्याघ्रं च पालयेत् ||7||

मक्षिकाः व्रणमिच्छन्ति
धनामिच्छन्ति पार्थिवाः |
नीचाः कलहमिच्छन्ति
शान्तिमिच्छन्ति साधवाः ||8||

काकः कृष्णः पिकः कृष्णः
को भेदः पिककाकयोः |
वसन्तसमये प्राप्ते
काकः काकः पिकः पिकः ||9||

पादपानां भयं वातः
पद्मानां शिशिरो भयम् |
पर्वतानां भयं वज्रः
साधूनां दुर्जनो भयम् ||10||

-भर्तृहरिः

Tuesday, September 14, 2010

2500 ಮೊಟ್ಟೆ, 5000 ರೂಪಾಯಿ!

ಇವತ್ತು ಮಧ್ಯಾಹ್ನ ನನ್ನ ಮೊಬೈಲಿಗೆ ಯಾವುದೋ ನಂಬರಿಂದ ಕಾಲ್ ಬಂತು. ಯಾರದಪ್ಪಾ ಈ ನಂಬರ್‍ ಅಂತ ಅಂದುಕೊಂಡು ರಿಸೀವ್ ಮಾಡಿದರೆ ಆ ಕಡೆಯಿಂದ "ನೀವು ನೀಡಿದ ಆರ್ಡರ್‍‌ನಂತೆ ನಿಮ್ಮ ಮನೆಗೆ 2500 ಮೊಟ್ಟೆ ಕಳುಹಿಸಿದ್ದೇವೆ, ಲಾರಿ ಡ್ರೈವರ್‍ ಹತ್ರ 5000 ರೂಪಾಯಿ ಕೊಟ್ಟುಬಿಡಿ" ಎಂದು ಹೇಳಿದರು. ನನಗೆ ಒಂದು ಸಲ ಏನು ಹೇಳಬೇಕೆಂದೇ ಗೊತ್ತಾಗಲಿಲ್ಲ. ನಾನು ಮೊಟ್ಟೇನೆ ತಿನ್ನಲ್ಲ, ಅಂತದರಲ್ಲಿ ಎರಡೂವರೆ ಸಾವಿರ ಮೊಟ್ಟೆಗೇಕೆ ಆರ್ಡರ್‍ ಮಾಡುತ್ತೇನೆ, ಬಹುಷಃ ರಾಂಗ್ ನಂಬರ್‍ ಡಯಲ್ ಮಾಡಿರಬೇಕು ಎಂದುಕೊಳ್ಳುತ್ತಿರುವಾಗಲೇ ಆ ಕಡೆಯಿಂದ ಮತ್ತೆ ಧ್ವನಿ ಕೇಳಿಬಂತು- "ನೀವೂ ನಿಮ್ಮ ಸ್ನೇಹಿತರನ್ನು ಇದೇ ರೀತಿ ಬೇಸ್ತು ಬೀಳಿಸಬೇಕೆ? ಹಾಗಾದರೆ ನಮ್ಮ ಕಾಲರ್‍ ಟ್ಯೂನ್ಸ್‌‌ಗೆ ಚಂದಾದಾರರಾಗಿ, ದರಗಳು ತಿಂಗಳಿಗೆ 28 ರೂಪಾಯಿ ಮಾತ್ರ. ಕಾಲರ್‍ ಟ್ಯೂನ್ ಸೆಟ್ ಮಾಡಿಕೊಳ್ಳುವುದಕ್ಕಾಗಿ ಸ್ಟಾರ್‍ ಹಾಗೂ ಒಂಭತ್ತನ್ನು ಒತ್ತಿ. ಕಂಡೀಷನ್ಸ್ ಅಪ್ಲೈ."

ಇದನ್ನು ಕೇಳಿ ನಾನೂ ಬೇಸ್ತು ಬಿದ್ದೆನಲ್ಲಾ ಅಂತ ಸಿಕ್ಕಾ ಪಟ್ಟೆ ನಗು ಬಂತು. ನಿಮಗೂ  +919449056700 ನಂಬರಿಂದ ಕಾಲ್ ಬಂದರೆ ರಿಸೀವ್ ಮಾಡಿ, ತಮಾಷೆಯಾಗಿರುತ್ತದೆ. :-)

ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ


ನನ್ನ ಹೊಸ ಬರಹಗಳನ್ನು ಇ-ಮೇಲ್ ಮುಖಾಂತರ ಪಡೆಯಲು ಇಲ್ಲಿ ನಿಮ್ಮ ಇ-ಮೇಲ್ ವಿಳಾಸವನ್ನು ನಮೂದಿಸಿ

Monday, September 13, 2010

ಅಂತಃಸ್ಫುರಣದ ಹೊಸ ಬರಹಗಳನ್ನು ಇ-ಮೇಲ್ ಮೂಲಕ ಪಡೆಯಿರಿ.

"ಅಂತಃಸ್ಫುರಣ"ದಲ್ಲಿ ಪ್ರಕಟವಾಗುವ ಹೊಸ ಬ್ಲಾಗ್ ಬರಹ ಹಾಗೂ ಲೇಖನಗಳನ್ನು ಓದಲು ಪ್ರತೀ ಸಲ ಈ ಬ್ಲಾಗಿಗೆ ಬರಲು ನಿಮಗೆ ತೊಂದರೆಯಾಗುತ್ತಿದ್ದರೆ, ನನ್ನ ಬರಹಗಳನ್ನು ಓದಲು ಇಲ್ಲೊಂದು ಸುಲಭದ ವಿಧಾನವಿದೆ. ಕೆಳಗೆ ಇರುವ ಬಾಕ್ಸ್‌‌ನಲ್ಲಿ ನಿಮ್ಮ ಇ-ಮೇಲ್ ವಿಳಾಸ ನಮೂದಿಸಿ, ನಂತರ "ಅಂತಃಸ್ಫುರಣಕ್ಕೆ ನಾನು ಚಂದಾದಾರನಾಗಬಯಸುತ್ತೇನೆ" ಬಟನ್ ಒತ್ತಿರಿ. Verification ವಿಂಡೋನಲ್ಲಿ ಬರುವ ಅಕ್ಷರಗಳನ್ನು ಟೈಪಿಸಿ verify ಮಾಡಿ. ನಂತರ ನಿಮ್ಮ ಇ-ಮೇಲ್ ಖಾತೆಗೆ kannadaprasanna[at]gmail.comನಿಂದ ಒಂದು  ಇ-ಮೇಲ್ ಬರುತ್ತದೆ, ಅದರಲ್ಲಿರುವ ಲಿಂಕ್‌‌ನ್ನು ಒತ್ತಿರಿ. ಇಷ್ಟು ಮಾಡಿದರೆ ಮುಂದೆ ಅಂತಃಸ್ಫುರಣದಲ್ಲಿ ಪ್ರಕಟವಾಗುವ ಎಲ್ಲ ಬ್ಲಾಗ್ ಬರಹ ಹಾಗೂ ಲೇಖನಗಳು ಇ-ಮೇಲ್ ಮುಖಾಂತರ ನಿಮಗೆ ತಲುಪುತ್ತದೆ. ಇದಕ್ಕೆ ಚಂದಾದಾರರಾದ ನಂತರ ನಿಮಗೆ ಈ ಸೌಲಭ್ಯ ಬೇಡ ಎನಿಸಿದರೆ unsubscribe ಮಾಡುವುದಕ್ಕೆ ಕೂಡ ಅವಕಾಶವಿದೆ, unsubscribe ಮಾಡುವ ವಿಧಾನವು ಅಂತಃಸ್ಫುರಣದಿಂದ ಬರುವ ಪ್ರತೀ ಇ-ಮೇಲ್ ಜೊತೆಗೆ ವಿವರಿಸಲ್ಪಟ್ಟಿರುತ್ತದೆ.


ಇಲ್ಲಿ ನಿಮ್ಮ ಇ-ಮೇಲ್ ವಿಳಾಸವನ್ನು ನಮೂದಿಸಿ, ನಂತರ ಅದರ ಕೆಳಗಿನ ಬಟನ್ ಒತ್ತಿರಿ.


ನಿಮ್ಮ ಇ-ಮೇಲ್ ವಿಳಾಸವನ್ನು ಎಲ್ಲಿಯೂ ಬಹಿರಂಗಗೊಳಿಸಲಾಗುವುದಿಲ್ಲ. ಅಸಲಿಗೆ ನನಗೆ ಕೂಡಾ ನಿಮ್ಮ ಇ-ಮೇಲ್ ವಿಳಾಸ ಗೊತ್ತಾಗುವುದಿಲ್ಲ. ಹಾಗಾಗಿ ನೀವು ಧೈರ್ಯವಾಗಿ ನಿಮ್ಮ ಇ-ಮೇಲ್ ವಿಳಾಸ ಕೊಡಬಹುದು.



ಇದನ್ನು ನೋಡಿದ ನಂತರ ನಿಮ್ಮ ಬ್ಲಾಗ್ ಓದುಗರಿಗೂ ಇದೇ ರೀತಿಯ ಸೌಲಭ್ಯ ಒದಗಿಸಬೇಕು ಎಂದೆನಿಸುತ್ತಿದೆಯೇ? ಹಾಗಾದರೆ ನನ್ನ ಮುಂದಿನ ಲೇಖನವನ್ನು ನಿರೀಕ್ಷಿಸಿ, :-)

ಹ್ಞಾ... ನನ್ನ ಈ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಲು ಮರೆಯಬೇಡಿ! :-)
 

ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ

Wednesday, September 8, 2010

ನಮ್ಮ ಸಂಸಾರ ಆನಂದ ಸಾಗರ....

ನಮ್ಮ ಸಂಸಾರ..
(ಅರೆ! ಯಾವನೋ ಫೋಟೋ ತೆಗೀತಿದ್ದಾನಲ್ಲಾ, ಇರು ಉಳಿದವರಿಗೂ ಮುಖ ತೋರಿಸಲು ಹೇಳುತ್ತೇನೆ.)




(ಏಯ್, ಫೋಟೋ ಸರಿಯಾಗಿ ತೆಗೆಯಬೇಕು. ಇಲ್ಲದಿದ್ದರೆ ನಿನ್ನ ಕ್ಯಾಮೆರಾ ನೆಟ್ಟಗಿರುವುದಿಲ್ಲ, ಹುಷಾರ್‍!)





(ನಮ್ಮ ಸಂಸಾರ, ಆನಂದ ಸಾಗರ.....)




(ಫೋಟೋ ತೆಗ್ದಿದ್ದು ಸಾಕು ಹೋಗಯ್ಯೋ, ಮಕ್ಳು ಆಟ ಆಡ್ಬೇಕು!)


-ಚಿತ್ರ ಮತ್ತು ಬರಹ: ಪ್ರಸನ್ನ ಎಸ್.ಪಿ