Showing posts with label ಧನ್ಯವಾದ. Show all posts
Showing posts with label ಧನ್ಯವಾದ. Show all posts

Monday, September 6, 2010

ನನ್ನ ಬರವಣಿಗೆಗೆ ಬೆಂಬಲ ನೀಡುತ್ತಿರುವ ಎಲ್ಲರಿಗೂ ಕೃತಜ್ಞತೆಗಳು

ಇವತ್ತು ಉದಯವಾಣಿಯ ಮಣಿಪಾಲ್ ಎಡಿಷನ್ನನ್ನು ನೋಡಿದಾಗ ನನ್ನ ಕಣ್ಣನ್ನು ನನಗೇ ನಂಬಲಾಗಲಿಲ್ಲ. ಕಾರಣ ಅಶೋಕ್ ಕುಮಾರ್‌ ಅವರು ಉದಯವಾಣಿಯ ನಿಸ್ತಂತು ಸಂಸಾರ ಅಂಕಣದಲ್ಲಿ ನನ್ನ ಬ್ಲಾಗನ್ನು ಪರಿಚಯಿಸಿದ್ದಾರೆ. ಅವರಿಗೆ ಈ ಮೂಲಕ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ. ಹಾಗೂ ಅದನ್ನು ನನ್ನ ಗಮನಕ್ಕೆ ತಂದು ಸಂಪದದಲ್ಲಿ ನನ್ನ ಹಾಗೂ ಅಶೋಕ್‌‌ರ ಬಗ್ಗೆ ಮೆಚ್ಚುಗೆಯ ನುಡಿಗಳನ್ನು ಬರೆದಿರುವ ರಾಘವೇಂದ್ರ ನಾವಡರಿಗೂ ಧನ್ಯವಾದಗಳು. ನನ್ನ ಬರಹ ಹಾಗೂ ಲೇಖನಗಳನ್ನು ಸಂಪದ ಹಾಗೂ ಇಲ್ಲಿ ನೀವೆಲ್ಲರೂ ಓದಿ ಪ್ರೋತ್ಸಾಹಿಸಿದ್ದೀರಿ. ನಿಮಗೆಲ್ಲರಿಗೂ ನನ್ನ ಅನಂತ ಧನ್ಯವಾದಗಳು. ನಾನು ಬರೆಯಲು ಪ್ರಾರಂಭಿಸಿದಾಗ ನನ್ನ ಬರಹಗಳು ಇಷ್ಟು ಜನರಿಗೆ ತಲುಪುತ್ತದೆ ಎಂದು ಖಂಡಿತಾ ಯೋಚಿಸಿರಲಿಲ್ಲ. ಬ್ಲಾಗರ‍್ stats ನಲ್ಲಿ ದೊರೆತ ಮಾಹಿತಿಯಂತೆ ಜುಲೈ2010ರಿಂದ ಇಲ್ಲಿಯವರೆಗೆ ಒಂದೂವರೆ ಸಾವಿರಕ್ಕೂ ಹೆಚ್ಚು ಜನ ನನ್ನ ಬ್ಲಾಗಿಗೆ ಭೇಟಿ ನೀಡಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೊಂದು ಜನ ನನ್ನ ಬ್ಲಾಗನ್ನು ನೋಡಿರುವುದು ನನಗೆ ತುಂಬಾ ಸಂತೋಷ ತಂದಿದೆ. ಇನ್ನು ಸಂಪದದಲ್ಲಿಯೂ ಕೂಡ ನಾನು ಬರೆದ ಲೇಖನ/ಬ್ಲಾಗ್‌ಗಳಿಗೆ ಪ್ರತಿಕ್ರಿಯಿಸಿ ಸಲಹೆಗಳನ್ನು ನೀಡಿದ್ದೀರಿ, ನನ್ನ ಬರಹಗಳನ್ನು ಮೆಚ್ಚಿದ್ದೀರಿ. ಇದೆಲ್ಲವನ್ನೂ ನಾನು ನನ್ನ ಜೀವಮಾನದಲ್ಲಿಯೇ ಮರೆಯಲಾರೆ. ಮುಂದೆಯೂ ನೀವೆಲ್ಲರೂ ನನ್ನ ಬರಹಗಳಿಗೆ ಇದೇ ರೀತಿ ಪ್ರೋತ್ಸಾಹ ನೀಡುತ್ತೀರೆಂದು ನಂಬಿದ್ದೇನೆ. 

ಧನ್ಯವಾದಗಳೊಂದಿಗೆ,
-ಪ್ರಸನ್ನ ಶಂಕರಪುರ



(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ) 

ಬಾಹ್ಯ ಸಂಪರ್ಕಗಳು:
ಅಶೋಕ್ ವರ್ಲ್ಡ್: http://ashok567.blogspot.com
ಉದಯವಾಣಿ ನಿಸ್ತಂತು ಸಂಸಾರ: http://207.218.202.244/epaper/ViewPDf.aspx?Id=51874
ಸಂಪದ: http://sampada.net 
ರಾಘವೇಂದ್ರ ನಾವಡರು ನಿಸ್ತಂತು ಸಂಸಾರದ ಬಗ್ಗೆ ಸಂಪದದಲ್ಲಿ ಬರೆದ ಬ್ಲಾಗ್: http://sampada.net/blog/ksraghavendranavada/06/09/2010/27810

Monday, August 23, 2010

"ಬರಹ"ವಾಸುಗೆ ನಮನ

"ಬರಹ", ಇದು ಕಂಪ್ಯೂಟರ್‌‌ನಲ್ಲಿ ಕನ್ನಡವನ್ನು ಬಳಸುವವರಿಗೆಲ್ಲರಿಗೂ ಚಿರಪರಿಚಿತ ತಂತ್ರಾಂಶ. ಕಂಪ್ಯೂಟರ್‌‌ನಲ್ಲಿ ಕನ್ನಡ ಲಿಪಿಯಲ್ಲಿ ಬರೆಯಲು ಹಾಗೂ ಕನ್ನಡದಲ್ಲಿ ಇಮೇಲ್‌‌ ಕಳುಹಿಸಲು ಸಹಾಯ ಮಾಡಿದ ಮೊತ್ತ ಮೊದಲ ಕನ್ನಡದ ತಂತ್ರಾಂಶ. ನಾನೂ ಕನ್ನಡದಲ್ಲಿ ಲೇಖನಗಳನ್ನು ಬರೆಯಬೇಕೆಂಬ ನನ್ನ ಕನಸನ್ನು ಈಡೇರಿಸಿಕೊಂಡಿದ್ದು ಇದೇ "ಬರಹ" ತಂತ್ರಾಂಶದ ಮೂಲಕ. ನಾನು ಪೆನ್ನು ಪೇಪರ್‍ ಬಳಸಿ ಬರೆದಿರುವುದಕ್ಕಿಂತಲೂ ಹೆಚ್ಚಾಗಿ ಬರಹ ತಂತ್ರಾಂಶ ಬಳಸಿ ಕಂಪ್ಯೂಟರ್‌‌ನಲ್ಲಿ ಬರೆದಿದ್ದೇನೆ. ಬರಹದ ಕಾರಣ ಕರ್ತರಾದ "ಶೇಷಾದ್ರಿ ವಾಸು" ಅವರಿಗೆ ನನ್ನ ಅನಂತ ಪ್ರಣಾಮಗಳು. "ಬರಹ" ಹಾಗೂ "ಶೇಷಾದ್ರಿ ವಾಸು" ಅವರ ಬಗ್ಗೆ ಆಗಸ್ಟ್ 22 2010ರ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ (ಪುಟ ಸಂಖ್ಯೆ 2) ಒಂದು ಲೇಖನ ಬಂದಿದೆ. ಅದು ಕೆಳಗಿನ ಚಿತ್ರದಲ್ಲಿದೆ. ಚಿತ್ರದ ಮೇಲೆ ಕ್ಲಿಕ್ಕಿಸಿ ಅದನ್ನು ಓದಬಹುದು.


Monday, August 16, 2010

ಕೋಮಲ್‌‌ರಿಗೆ ಧನ್ಯವಾದಗಳು.

ನನ್ನ ಬಗ್ಗೆ ಸಂಪದದಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿ ಧನ್ಯವಾದ ಅರ್ಪಿಸಿದ ಕೋಮಲ್ ಅವರಿಗೆ ನನ್ನ ವಂದನೆಗಳು.

-ಪ್ರಸನ್ನ.ಎಸ್.ಪಿ

ಕೋಮಲ್ ಅವರ ಬ್ಲಾಗ್ : http://komal1231.blogspot.com