Showing posts with label ಬಾಬರಿ ಮಸೀದಿ. Show all posts
Showing posts with label ಬಾಬರಿ ಮಸೀದಿ. Show all posts

Friday, October 1, 2010

ರಾಮ ಜನ್ಮಭೂಮಿ - ಬಾಬರಿ ಮಸೀದಿ ವಿವಾದ ನನ್ನ ದೃಷ್ಟಿಯಲ್ಲಿ.

ರಾಮಜನ್ಮ ಭೂಮಿ - ಬಾಬ್ರಿ ಮಸೀದಿ ಜಾಗದ ಬಗ್ಗೆ ತೀರ್ಪು ಬರಲಿದೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗುವ ತನಕ ಹೀಗೊಂದು ವಿವಾದವಿದೆ ಎಂದೇ ನನಗೆ ಗೊತ್ತಿರಲಿಲ್ಲ. ಗೊತ್ತಾದ ಮೇಲೂ ಇದರ ಬಗ್ಗೆ ನನಗೆ ಯಾವ ಆಸಕ್ತಿಯೂ ಇರಲಿಲ್ಲ. ನಾನು ಹುಟ್ಟುವ ವೇಳೆಗೆ ಗಲಾಟೆ, ಹತ್ಯಾಕಾಂಡಗಳೆಲ್ಲಾ ಮುಗಿದೇ ಹೋಗಿತ್ತು. ಬುದ್ಧಿ  ಬೆಳೆಯುವ ವೇಳೆಗಾಗಲೇ ತೀರ್ಪು ಬರುವ ಸಮಯವಾಗಿತ್ತು. ನಾನು ಈ ವಿಷಯದಲ್ಲಿ ಧಾರ್ಮಿಕವಾಗಿಯಾಗಲೀ ಅಥವಾ ಭಾವನಾತ್ಮಕವಾಗಿಯಾಗಲೀ ತೊಡಗಿಸಿಕೊಳ್ಳಲೇ ಇಲ್ಲ. ಹೀಗಾಗಿ ಈ ತೀರ್ಪಿನಿಂದ ನನಗೆ ಸಂತೋಷವೂ ಆಗಿಲ್ಲ, ಬೇಸರವೂ ಆಗಿಲ್ಲ.

ತೀರ್ಪು ಬಂದ ಮೇಲೂ ಈ ವಿಷಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಉಂಟಾಗಲಿಲ್ಲ. ಜನರಿಗೂ ಇದರ ಬಗ್ಗೆ ಕುತೂಹಲ ಇದ್ದ ಬಗ್ಗೆ ನಾಕಾಣೆ. ಯಾವುದೋ ಒಂದು ಪಂಗಡದ ಜನರನ್ನು ಒಲಿಸಿಕೊಳ್ಳಲು ರಾಜಕೀಯ ಪಕ್ಷಗಳು ಸುಮ್ಮನೇ ಈ ವಿಷಯವನ್ನು ದಾಳವಾಗಿಸಿಕೊಂಡಿವೆ ಅನಿಸುತ್ತದೆ. ತೀರ್ಪು ಬರುವ ಮೊದಲು ಹಾಗೂ ತೀರ್ಪು ಬಂದ ನಂತರ ಸುತ್ತ ಮುತ್ತಲ ಜನರಲ್ಲಿ ಯಾವುದೇ ರೀತಿಯ ಬದಲಾವಣೆಯನ್ನೂ ನಾನು ಗಮನಿಸಿಲ್ಲ.

ಅಲ್ಲಿರುವ ತುಂಡು ಭೂಮಿ ಯಾರಿಗೆ ಸೇರಿದರೇನು? ಆ ಜಾಗ ಭಾರತಕ್ಕೇ ಸೇರಿದ್ದಲ್ಲವೇ? ನಾವೆಲ್ಲರೂ ಭಾರತೀಯರಲ್ಲವೇ?

-ಪ್ರಸನ್ನ ಶಂಕರಪುರ


Web Hosting